Wednesday, December 10, 2008

ಶ್ರೀ ಸತ್ಯಸಾಯಿ ವ್ರತ

ಭಾನುವಾರ ಡಿಸೆಂಬರ್ ೨೮, ೨೦೦೮ರಂದು ಮೈಸೂರಿನ ಸಾಯಿ ವೈಭವ ಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ೮೩ನೇ ವರ್ಧಂತ್ಯುತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯಸಾಯಿ ವ್ರತಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಆ ದಿನ ೮೩ ದಂಪತಿಗಳು ವ್ರತದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಸಕ್ತಿಯುಳ್ಳವರು ಈ ತಿಂಗಳ ೧೮ರ ಒಳಗೆ ಕೆಳಕಂಡವರ ಬಳಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳತಕ್ಕದ್ದು.

ವ್ರತದ ನೇತೃತ್ವ ಮತ್ತು ಉಪನ್ಯಾಸ
ಡಾ. ಏ. ಕುಮಾರ ಸುಬ್ರಹ್ಮಣ್ಯ ಭಟ್‌
ಸಂಸ್ಕೃತ ವಿದ್ವಾಂಸರು, ಮಂಗಳೂರು

ಕಾರ್ಯಕ್ರಮದ ಅಧ್ಯಕ್ಷತೆ
ಪ್ರೊ. ಕೆ. ಕೇಶವಮೂರ್ತಿ
ನಿರ್ದೇಶಕರು
ಭಾರತೀಯ ಸಂಸ್ಕೃತಿ ವಿದ್ಯಾಕೇಂದ್ರ, ಮೈಸೂರು

ವ್ರತ ನಡೆಯುವ ಸ್ಥಳದ ವಿಳಾಸ :
ಸಾಯಿ ವೈಭವ ಕೇಂದ್ರ
ಬನ್ನಿಮಂಟಪ 'ಬಿ' ಲೇಔಟ್, ಆಲ್ ಕಬೀರ್ ಶಾಲೆ ಬಳಿ
ಮೈಸೂರು ೫೭೦ ೦೧೫


(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕ್ಲಿಕ್ಕಿಸಿ)

ನೆನಪಿಡಿ : ಮೊದಲು ಬಂದವರಿಗೆ ಮಾತ್ರವೇ ಆದ್ಯತೆ.

ಸಂಪರ್ಕಿಸಿ :
ಶ್ರೀ. ಆರ್.ಜಿ. ಆಚಾರ್ಯ, ದೂ.: 2344950
ಶ್ರೀ. ಹೆಚ್.ಆರ್. ಲಕ್ಷ್ಮೀಕಾಂತ್, ದೂ.: 2521234
ಶ್ರೀಮತಿ ಚಂದ್ರಕಲಾ ನಾಗೇಶ್, ದೂ.: 4246476

ಸೊಳ್ಳೆ ಪುರ ಗ್ರಾಮಸೇವೆ

ಭಗವಾನ್ ಬಾಬಾರವರ ೮೩ನೇ ವರ್ಧಂತ್ಯುತ್ಸವದ ಅಂಗವಾಗಿ ಸೊಳ್ಳೆ ಪುರದಲ್ಲಿ ಗ್ರಾಮಸೇವಾ ಕಾರ್ಯಕ್ರಮವನ್ನು ತಾ|| ೩೦-೧೧-೨೦೦೮ ರಂದು ಹಮ್ಮಿಕೊಳ್ಳಲಾಗಿತ್ತು. ಈ ಗ್ರಾಮಸೇವೆಯನ್ನು ನಗರಸಂಕೀರ್ತನೆ ಮೂಲಕ ಪ್ರಾರಂಭಿಸಲಾಯಿತು. ಈ ನಗರಸಂಕಿರ್ತನೆಯಲ್ಲಿ ಹಳ್ಳಿಯ ನಿವಾಸಿಗಳು ಕೂಡ ಭಾಗವಹಿಸಿದ್ದರು. ಅಲ್ಲಿ ವಾಸಿಸುತ್ತಿರುವ ೭೫ ಕುಟುಂಬಗಳಿಗೆ ಉಚಿತ ವೈದ್ಯಕೀಯ ತಪಾಸಣೆ, ಸಾಯಿ ಪ್ರೋಟೀನ್ ವಿತರಣೆ, ನಾರಾಯಣ ಸೇವೆ, ಹಳ್ಳಿಯ ಮಕ್ಕಳಿಗೆ ಬಾಲವಿಕಾಸ ಮುಂತಾದ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದಲ್ಲದೆ ಪ್ರತೀ ಕುಟುಂಬಕ್ಕೆ ವಸ್ತ್ರ, ಹೊದಿಕೆ ಮತ್ತು ಚಾಪೆಗಳನ್ನು ಒದಗಿಸಲಾಯಿತು.

ಜಾಗತಿಕ ಅಖಂಡ ಭಜನೆ

ಜಾಗತಿಕ ಅಖಂಡ ಭಜನಾ ಕಾರ್ಯಕ್ರಮವು ಪ್ರತಿ ವರ್ಷದಂತೆ ನವೆಂಬರ್ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರದಂದು ಮೈಸೂರಿನ ಶ್ರೀ ಸತ್ಯ ಸಾಯಿ ಕ್ಷೇತ್ರದಲ್ಲಿ ನಡೆಯಿತು. ತಾ|| ೮-೧೧-೨೦೦೮ ರ ಸಂಜೆ ೬ ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾದ ಶ್ರೀಮತಿ ಸುಕನ್ಯ ಪ್ರಭಾಕರ್ ರವರು ಹಾಗೂ ಮೈಸೂರಿನ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಸಾದ್ ರವರು ದೀಪಬೆಳಗಿಸುವುದರ ಮೂಲಕ ಜಾಗತಿಕ ಅಖಂಡ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಅಖಂಡ ಭಜನಾ ಕಾರ್ಯಕ್ರಮವು ಮರುದಿನ ಸಂಜೆ ೬ ಗಂಟೆವರೆವಿಗೂ ನಿರಂತರವಾಗಿ ನಡೆಯಿತು.

ಕಟ್ಟೆ ಹುಂಡಿ ಗ್ರಾಮಸೇವೆ

ಪ್ರತಿ ತಿಂಗಳ ಮೊದಲನೆ ಭಾನುವಾರದಂದು ನಡೆಯುವ ಗ್ರಾಮಸೇವೆ ನವೆಂಬರ್ ತಿಂಗಳಿನಲ್ಲಿ ಕಟ್ಟೆ ಹುಂಡಿಯಲ್ಲಿ ನಡೆಯಿತು. ನಗರಸಂಕೀರ್ತನೆಯೊಂದಿಗೆ ಪ್ರಾರಂಭವಾದ ಈ ಗ್ರಾಮಸೇವೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ, ನಾರಾಯಣ ಸೇವೆ, ಹಳ್ಳಿಯ ಮಕ್ಕಳಿಗೆ ಬಾಲವಿಕಾಸ ಮುಂತಾದ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

Friday, December 5, 2008

ಸೇವಾದಳ ಪುನಶ್ಚೇತನ ಶಿಬಿರ

ಭಗವಾನ್ ಬಾಬಾರವರ ಅನುಗ್ರಹದಿಂದ ಶ್ರೀ ಸತ್ಯ ಸಾಯಿ ವೈಭವ ಕೆಂದ್ರದಲ್ಲಿ ಅಕ್ಟೋಬರ್ ೧೮ ಮತ್ತು ೧೯ ರಂದು ಮುಖ್ಯ ಅತಿಥಿಗಳಾದ ಶ್ರೀ. ಬೀರಯ್ಯನವರ ಅಧ್ಯಕ್ಷತೆಯಲ್ಲಿ ಸೇವಾದಳ ಪುನಶ್ಚೇತನ ಶಿಬಿರ ನಡೆಯಿತು.