ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಇಲ್ಲಿಯವರೆಗಿನ ತಮ್ಮ ಕೆಲಸ ಮತ್ತು ಸಾಧನೆಗಳ ಒಂದು ಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಸ್ವಾಮಿಯ ನಿರ್ದೇಶನದಲ್ಲಿ ಕೈಗೊಂಡಿರುವ ಅನೇಕ ಮಾನವ ಸೇವಾ ಕಾರ್ಯಗಳ ಒಂದು ಇಣುಕು ನೋಟ ಇಲ್ಲಿ ಲಭ್ಯವಿತ್ತು. ಈ ವಿಶೇಷ ಪ್ರದರ್ಶನವನ್ನು ನೋಡಲು ಮೈಸೂರಿನ ಸಾಯಿ ಭಕ್ತರ ತಂಡವೊಂದು ಸೆಪ್ಟೆಂಬರ್ 21ರಂದು ಬೆಂಗಳೂರಿಗೆ ತೆರಳಿತು. ಈ ಪಯಣದ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ :
ದಿನಾಂಕ 7.9.2008ರಂದು ಕಟ್ಟೆಹುಂಡಿ ಗ್ರಾಮದಲ್ಲಿ ಸೇವಾ ಕಾರ್ಯಗಳನ್ನು ಯೋಜಿಸಲಾಗಿದೆ. ಹಳ್ಳಿಯಲ್ಲಿ ನಾರಾಯಣ ಸೇವೆ, ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ, ಬಾಲವಿಕಾಸ ತರಗತಿಗಳು, ನಗರ ಸಂಕೀರ್ತನೆಗಳನ್ನು ನಡೆಸಲಾಗುತ್ತದೆ. ಸೇವೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಭಾನುವಾರ ಬೆಳಗ್ಗೆ 9.00 ಗಂಟೆಯೊಳಗೆ ಚಾಮರಾಜಾಪುರಂನಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಸೇರಬೇಕಾಗಿ ವಿನಂತಿ.