Saturday, January 3, 2009

ಶ್ರೀ ಸತ್ಯಸಾಯಿ ವ್ರತ ಮತ್ತು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೮೩ನೇ ವರ್ಧಂತ್ಯುತ್ಸವ

ಡಿಸೆಂಬರ್ ೨೮, ೨೦೦೮ ರ ಭಾನುವಾರದಂದು ಶ್ರೀ ಸತ್ಯಸಾಯಿ ವ್ರತ ಮತ್ತು ಶ್ರೀ ಸತ್ಯಸಾಯಿ ಬಾಬಾರವರ ೮೩ನೇ ವರ್ಧಂತ್ಯುತ್ಸವವನ್ನು ಸಾಯಿ ವೈಭವ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಮಂಗಳೂರಿನ ಸಂಸ್ಕೃತ ವಿದ್ವಾಂಸರಾದ ಡಾ. ಏ. ಕುಮಾರ ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಕೆ. ಕೇಶವಮೂರ್ತಿ, ನಿರ್ದೇಶಕರು, ಭಾರತೀಯ ವಿದ್ಯಾ ಕೇಂದ್ರ ವಹಿಸಿದ್ದರು. ವೇದಘೋಷದೊಂದಿಗೆ ಪ್ರಾರಂಭವಾದ ಶ್ರೀ ಸತ್ಯಸಾಯಿ ವ್ರತ ಕಾರ್ಯಕ್ರಮದಲ್ಲಿ ೮೩ ದಂಪತಿಗಳು ಭಾಗವಹಿಸಿದ್ದರು.

No comments: