Saturday, January 3, 2009

ಶ್ರೀ ಸತ್ಯಸಾಯಿ ವ್ರತ ಮತ್ತು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೮೩ನೇ ವರ್ಧಂತ್ಯುತ್ಸವ

ಡಿಸೆಂಬರ್ ೨೮, ೨೦೦೮ ರ ಭಾನುವಾರದಂದು ಶ್ರೀ ಸತ್ಯಸಾಯಿ ವ್ರತ ಮತ್ತು ಶ್ರೀ ಸತ್ಯಸಾಯಿ ಬಾಬಾರವರ ೮೩ನೇ ವರ್ಧಂತ್ಯುತ್ಸವವನ್ನು ಸಾಯಿ ವೈಭವ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಮಂಗಳೂರಿನ ಸಂಸ್ಕೃತ ವಿದ್ವಾಂಸರಾದ ಡಾ. ಏ. ಕುಮಾರ ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಕೆ. ಕೇಶವಮೂರ್ತಿ, ನಿರ್ದೇಶಕರು, ಭಾರತೀಯ ವಿದ್ಯಾ ಕೇಂದ್ರ ವಹಿಸಿದ್ದರು. ವೇದಘೋಷದೊಂದಿಗೆ ಪ್ರಾರಂಭವಾದ ಶ್ರೀ ಸತ್ಯಸಾಯಿ ವ್ರತ ಕಾರ್ಯಕ್ರಮದಲ್ಲಿ ೮೩ ದಂಪತಿಗಳು ಭಾಗವಹಿಸಿದ್ದರು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಗಳು ಮೈಸೂರಿನ ಸೇವಾ ಕಾರ್ಯ ಕ್ರಮಗಳ ಚಿತ್ರ ಪ್ರದರ್ಶನ

ಮೈಸೂರಿನ ೨೦೦೮ ರ ದಸರಾ ವಸ್ತು ಪ್ರದರ್ಶನದಲ್ಲಿ ಭಗವಾನ್ ಬಾಬಾರವರ ಬಾಲ್ಯ ಮತ್ತು ಸತ್ಯ ಸಾಯಿ ಸೇವಾ ಟ್ರಸ್ಟ್ ಪ್ರಶಾಂತಿ ನಿಲಯಂ ಪುಟ್ಟಪರ್ತಿ ಕೈಗೊಂಡಿರುವ ಸೇವಾ ಕಾರ್ಯಗಳ ಚಿತ್ರಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಚಿತ್ರಪ್ರದರ್ಶನದಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮೈಸೂರು ಕೈಗೊಂಡಿರುವ ವಿವಿಧ ಸೇವಾ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಒಳಗೊಂಡ ಸಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಚಿತ್ರಪ್ರದರ್ಶನಕ್ಕೆ ಎರಡನೆ ಬಹುಮಾನ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.